'ಅವನ ನಿಷ್ಠೆ ತಲೆಬಾಗುವುದಿಲ್ಲ, ಜ್ವಾಲೆಯಂತೆ ಉರಿಯುತ್ತದೆ': ವಿಭಿನ್ನ ಅವತಾರದಲ್ಲಿ ಮನದ ಕಡಲು ಹೀರೋ ಸುಮುಖ್

'ಅವನ ನಿಷ್ಠೆ ತಲೆಬಾಗುವುದಿಲ್ಲ, ಜ್ವಾಲೆಯಂತೆ ಉರಿಯುತ್ತದೆ': ವಿಭಿನ್ನ ಅವತಾರದಲ್ಲಿ ಮನದ ಕಡಲು ಹೀರೋ ಸುಮುಖ್
By Published : September 9, 2025 at 1:54 PM IST

'ಮನದ ಕಡಲು ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಹುಟ್ಟಿಸಿರುವ ಯುವ ನಾಯಕ ನಟ ಸುಮುಖ್ ಇಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಸುಮುಖ್ ಹುಟ್ಟುಹಬ್ಬದ ವಿಶೇಷವಾಗಿ ಇಂದು ಅವರ ಹೊಸ ಸಿನಿಮಾ ಘೋಷಣೆಯಾಗಿದೆ. ಈ ಮೂಲಕ ಅಭಿಮಾನಿಗಳಿಗೆ ಬರ್ತ್​​​ಡೇ ಟ್ರೀಟ್​ ಸಿಕ್ಕಿದೆ.

ರಗಡ್ ಅವತಾರದಲ್ಲಿ ಲವರ್​ ಬಾಯ್​​: ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ನಿರ್ದೇಶನದ ಮನದ ಕಡಲು ಚಿತ್ರದಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದ ಸುಮುಖ್ ಅವರೀಗ ಹೊಸ ಅವತಾರವೆತ್ತಿದ್ದಾರೆ‌. ಚಾಕೋಲೇಟ್ ಹೀರೋ ಕಂಪ್ಲೀಟ್ ರಗಡ್ ಅವತಾರದಲ್ಲಿ ಪ್ರೇಕ್ಷಕರಿಗೆ ದರ್ಶನ ಕೊಡಲು ರೆಡಿಯಾಗಿದ್ದಾರೆ.

'ಅವನ ನಿಷ್ಠೆ ತಲೆಬಾಗುವುದಿಲ್ಲ, ಅದು ಜ್ವಾಲೆಯಂತೆ ಹೊತ್ತಿ ಉರಿಯುತ್ತದೆ': ಸುಮುಖ್ ಹುಟ್ಟುಹಬ್ಬದ ನಿಮಿತ್ತ ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಗಣೇಶನ ಪೇಂಟಿಂಗ್​ ಎದುರು ಕೈಯಲ್ಲಿ ಪೇಂಟ್​ ಬಾಕ್ಸ್ ಹಿಡಿದು ನಿಂತಿರುವ ಸುಮುಖ್ ಅವರ ಪೋಸ್ಟರ್ ಅನಾವರಣಗೊಳಿಸಲಾಗಿದೆ. ಪೋಸ್ಟ್​​ಗೆ, ''ಅವನ ನಿಷ್ಠೆ ತಲೆಬಾಗುವುದಿಲ್ಲ, ಅದು ಜ್ವಾಲೆಯಂತೆ ಹೊತ್ತಿ ಉರಿಯುತ್ತದೆ'' ಎಂಬ ಕ್ಯಾಪ್ಷನ್​​ ಕೊಡಲಾಗಿದೆ. ಜೊತೆಗೆ, 'ರಾಯಲ್ ಫ್ಲೈ ಎಂಟರ್‌ಟೈನ್‌ಮೆಂಟ್ಸ್‌ ವತಿಯಿಂದ ಸುಮುಖ್ ಅವರಿಗೆ ಆದರದ ಸ್ವಾಗತ. ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು!' ಎಂದೂ ಬರೆಯಲಾಗಿದೆ. ಶೀರ್ಷಿಕೆ ಇನ್ನಷ್ಟೇ ಘೋಷಣೆಯಾಗಬೇಕಿದೆ.

Sumukh

ನಿರ್ದೇಶಕರಾಗಿ ಅಸೋಸಿಯೇಟ್ ಡೈರೆಕ್ಟರ್ ಸಂಜಯ್ ಕೆ.ಕೆ: ಕಳೆದ 15 ವರ್ಷಗಳಿಂದ ಅಸೋಸಿಯೇಟ್ ಡೈರೆಕ್ಟರ್ ಆಗಿ ಚಿತ್ರರಂಗಕ್ಕೆ ಸೇವೆ ಸಲ್ಲಿಸಿರುವ ಸಂಜಯ್ ಕೆ.ಕೆ ಎಂಬುವವರು ಈ ಚಿತ್ರಕ್ಕೆ ಆ್ಯಕ್ಷನ್​​​ ಕಟ್​ ಹೇಳುತ್ತಿದ್ದಾರೆ. ಈ ಸಿನಿಮಾ ಮೂಲಕ ಡೈರೆಕ್ಟರ್ ಕುರ್ಚಿ ಅಲಂಕರಿಸುತ್ತಿರುವ ಸಂಜಯ್ ಕಥೆ ಬರೆದು‌ ಚೊಚ್ಚಲ ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಸತ್ಯ ಘಟನೆಗೆ ಸಿನಿಮಾ ಸ್ಪರ್ಶ: ಸಂಜಯ್ ಅವರು ಈ ಚಿತ್ರದ ಮೂಲಕ ನೈಜ ಕಥೆ ಹೇಳೋದಕ್ಕೆ ಹೊರಟ್ಟಿದ್ದಾರೆ. ಬೆಂಗಳೂರಿನಲ್ಲಿ ನಡೆದ ಸತ್ಯ ಘಟನೆಯೊಂದನ್ನು ಸಿನಿಮಾ ರೂಪಕ್ಕಿಳಿಸುತ್ತಿದ್ದಾರೆ‌. ಕಳೆದ ಐದು ವರ್ಷಗಳಿಂದ ಕಥೆ ಹೆಣೆದು ಇದೀಗ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದಾರೆ‌. ಈ ಚಿತ್ರದಲ್ಲಿ ಸುಮುಖ್ ಹೊಸ ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಂಜಯ್ ಹಾಗೂ ಸುಮುಖ್ ಅವರ ಹೊಸ ಸಾಹಸಕ್ಕೆ ರಾಯಲ್ ಫೈ ಎಂಟರ್ಟೈನ್ಮೆಂಟ್ ಬಂಡವಾಳ ಹಾಕುತ್ತಿದೆ. ಶೀಘ್ರದಲ್ಲೇ ಚಿತ್ರತಂಡ ಉಳಿದ ಅಪ್ಡೇಟ್ಸ್​ ಒದಗಿಸಲಿದೆ. ಸದ್ಯ ಪೋಸ್ಟರ್​ ಸಿನಿಪ್ರಿಯರ ಗಮನ ಸೆಳೆಯುತ್ತಿದೆ.

📚 Related News