ಬಸ್ತಾರ್ ಒಲಿಂಪಿಕ್ಸ್: ಶರಣಾದ ನಕ್ಸಲರಿಗೂ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಅವಕಾಶ

ಬಸ್ತಾರ್ ಒಲಿಂಪಿಕ್ಸ್: ಶರಣಾದ ನಕ್ಸಲರಿಗೂ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಅವಕಾಶ
By Published : October 23, 2025 at 5:52 PM IST | Updated : October 23, 2025 at 8:52 PM IST

ರಾಯ್​ಪುರ್(ಛತ್ತೀಸ್​ಗಢ):ಬಸ್ತಾರ್​ ಒಲಿಪಿಂಕ್ಸ್‌-2025ಕ್ಕೆ ಇಲ್ಲಿಯವರೆಗೆ ರಾಜ್ಯದ 7 ಜಿಲ್ಲೆಗಳಿಂದ ಬಸ್ತಾರ್ ವಲಯದಿಂದ 3,91,289 ಅಥ್ಲೀಟ್​​ಗಳು ನೋಂದಣಿ ಮಾಡಿದ್ದಾರೆ. ಅಕ್ಟೋಬರ್​ 25ರಿಂದ ನವೆಂಬರ್​ 2025ರವರೆಗೆ ಬ್ಲಾಕ್​ ಮಟ್ಟದ ಸ್ಪರ್ಧೆಗಳು ನಡೆಯಲಿವೆ. ಇದಾದ ಬಳಿಕ ಜಿಲ್ಲಾ ಮಟ್ಟ ಮತ್ತು ವಲಯ ಮಟ್ಟದ ಸ್ಪರ್ಧೆ ನಡೆಯಲಿವೆ. ಬಸ್ತಾರ್​ ಕ್ರೀಡಾ ಪ್ರತಿಭೆಗಳಿಗೆ ರಾಷ್ಟ್ರಮಟ್ಟದ ವೇದಿಕೆ ಕಲ್ಪಿಸುವ ಉದ್ದೇಶದಿಂದ ಈ ಕ್ರೀಡಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಬಸ್ತಾರ್​ ಒಲಿಂಪಿಕ್ಸ್‌ನಲ್ಲಿ 100ಮೀ, 200ಮೀ, 400 ಮೀ, ಲಾಂಗ್​ ಜಂಪ್​, ಹೈ ಜಂಪ್, ಶಾಟ್​ಪುಟ್​, ಡಿಸ್ಕಸ್​ ಥ್ರೋ, ಜಾವಲಿನ್​ ಥ್ರೋ, 4x100ಮೀ ರಿಲೇ ಓಟದಂತಹ ಕ್ರೀಡೆಗಳಿರಲಿವೆ.

ಇದರ ಜೊತೆಗೆ, ಜಿಲ್ಲಾ ಮಟ್ಟದಲ್ಲಿ ಆರ್ಚರಿ, ಫುಟ್​ಬಾಲ್​, ಕಬ್ಬಡಿ, ಖೋ-ಖೋ, ಬ್ಯಾಡ್ಮಿಂಟನ್​, ಕರಾಟೆ, ವಾಲಿಬಾಲ್​ ಮತ್ತು ಹಗ್ಗ ಎಳೆಯುವ ಆಟ ಸೇರಿದಂತೆ ಹಾಕಿ, ವೈಟ್​ಲಿಫ್ಟಿಂಗ್​ ಇರಲಿದೆ. ಇಲ್ಲಿ ಕೇವಲ ಆಧುನಿಕ ಕ್ರೀಡೆಯನ್ನು ಮಾತ್ರ ಉತ್ತೇಜಿಸದೇ ಸ್ಥಳೀಯ ಸಾಂಪ್ರದಾಯಿಕ ಆಟಗಳಿಗೂ ವೇದಿಕೆ ಕಲ್ಪಿಸಲಾಗುತ್ತಿದೆ. ಮನ್​ ಕೀ ಬಾತ್​ನಲ್ಲಿ ಉಲ್ಲೇಖಿಸಿದ್ದ ಮೋದಿ:ಬಸ್ತರ್​​ ಒಲಿಂಪಿಕ್ಸ್‌​ ಕುರಿತು ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್​ ಕಿ ಬಾತ್ ಬಾನುಲಿ​ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ್ದರು. ಬಸ್ತಾರ್​ ಒಲಿಂಪಿಕ್ಸ್ ಕೇವಲ ಕ್ರೀಡಾ ಕಾರ್ಯಕ್ರಮವಲ್ಲ. ಇದು ಅಭಿವೃದ್ಧಿ ಮತ್ತು ಕ್ರೀಡೆಗೆ ವೇದಿಕೆಯಾಗಲಿದೆ.

ಹೊಸ ಭಾರತ ನಿರ್ಮಾಣದಲ್ಲಿ ಯುವಜನರಿಗೆ ಅವಕಾಶ ನೀಡಲಿದೆ ಎಂದು ತಿಳಿಸಿದ್ದರು. ಶರಣಾದ ನಕ್ಸಲರಿಗೂ ಅವಕಾಶ:ಬಸ್ತಾರ್ ಒಲಿಂಪಿಕ್ಸ್ ಜೂನಿಯರ್ 14-17 ವರ್ಷ ಮತ್ತು ಹಿರಿಯರ ವಿಭಾಗಗಳನ್ನು ಹಾಗೂ ವಿಶೇಷ ವಿಭಾಗವನ್ನೂ ಒಳಗೊಂಡಿದೆ. ನಕ್ಸಲ್ ಹಿಂಸಾಚಾರದಿಂದ ಅಂಗವಿಕಲರಾದ ವ್ಯಕ್ತಿಗಳು ಮತ್ತು ಶರಣಾದ ನಕ್ಸಲರಿಗೂ ಕೂಡ ಈ ಕಾರ್ಯಕ್ರಮದಲ್ಲಿ ವೇದಿಕೆ ನೀಡಲಾಗುತ್ತಿದೆ. ಇದು ಕ್ರೀಡೆಗಳ ಮೂಲಕ ಪುನರ್ವಸತಿ, ಪುನರುಜ್ಜೀವನ ಮತ್ತು ಸಾಮಾಜಿಕ ಏಕೀಕರಣದ ಕಡೆಗೆ ಒಂದು ಐತಿಹಾಸಿಕ ಹೆಜ್ಜೆ. ಶರಣಾದ ನಕ್ಸಲರ ಸೇರ್ಪಡೆಯು ಬಸ್ತಾರ್‌ನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಪ್ರಯತ್ನಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಪ್ರಶಸ್ತಿಗಳು:ಜಿಲ್ಲಾ ಮತ್ತು ವಿಭಾಗೀಯ ಮಟ್ಟದಲ್ಲಿ ಗೆದ್ದವರಿಗೆ ನಗದು ಬಹುಮಾನ, ಪದಕ, ಟ್ರೋಫಿ, ಶೀಲ್ಡ್​ ನೀಡಲಾಗುತ್ತದೆ. ನಗದು ಹಣವನ್ನು ಕ್ರೀಡಾಳುಗಳ ಖಾತೆಗೆ ಡಿಬಿಟಿ ಮೂಲಕ ಜಮೆ ಮಾಡಲಾಗುತ್ತದೆ. ವಲಯ ಮಟ್ಟದ ವಿಜೇತರನ್ನು ಬಸ್ತಾರ್​ ಯೂತ್​ ಐಕಾನ್​ ಆಗಿ ಮಾಡಲಾಗುತ್ತದೆ. ಬಸ್ತಾರ್‌ನ ಯುವಕರನ್ನು ಮುಖ್ಯವಾಹಿನಿಗೆ ಸೇರಿಸುವುದು, ಪ್ರತಿಭೆ ಅನಾವರಣ ಈ ಕಾರ್ಯಕ್ರಮದ ಪ್ರಾಥಮಿಕ ಉದ್ದೇಶ. ಈ ಉಪಕ್ರಮವು ಕೇವಲ ಕ್ರೀಡಾಕೂಟವಲ್ಲ, ಸರ್ಕಾರ ಮತ್ತು ಸಾರ್ವಜನಿಕರ ನಡುವಿನ ವಿಶ್ವಾಸ ಮತ್ತು ಸಂವಾದದ ಸೇತುವೆಯೂ ಆಗಿದೆ.

ಇವುಗಳನ್ನೂ ಓದಿ:.

📚 Related News