'ಪ್ರೀತಿ ಪಡೆದುಕೊಳ್ಳುವ ಶಕ್ತಿ ಇಲ್ದಿದ್ರೆ ಪ್ರೀತಿ ಮಾಡ್ಬಾರ್ದು': 'ಲವ್ ಯು ಮುದ್ದು' ವಿಭಿನ್ನ ಪ್ರೇಮ್ ಕಹಾನಿ

'ಪ್ರೀತಿ ಪಡೆದುಕೊಳ್ಳುವ ಶಕ್ತಿ ಇಲ್ದಿದ್ರೆ ಪ್ರೀತಿ ಮಾಡ್ಬಾರ್ದು': 'ಲವ್ ಯು ಮುದ್ದು' ವಿಭಿನ್ನ ಪ್ರೇಮ್ ಕಹಾನಿ
By Published : October 29, 2025 at 1:10 PM IST

'ಪ್ರೀತಿಯನ್ನು ಪಡೆದುಕೊಳ್ಳುವ ಶಕ್ತಿ ಇಲ್ಲದೇ ಇದ್ರೆ ಪ್ರೀತಿ ಮಾಡಬಾರದು' ಎಂಬ ಎಳೆಯೊಂದಿಗೆ ಮೂಡಿಬರುತ್ತಿರುವ ಸಿನಿಮಾ 'ಲವ್ ಯು ಮುದ್ದು'. ಕೆಮಿಸ್ಟ್ರಿ ಆಫ್ ಕರಿಯಪ್ಪ ಖ್ಯಾತಿಯ ನಿರ್ದೇಶಕ ಕುಮಾರ್ ಅವರ ಹೊಸ ಚಿತ್ರವೀಗ ಬಿಡುಗಡೆಗೆ ಸಜ್ಜಾಗಿದೆ. 'ಲವ್ ಯು ಮುದ್ದು' ಪ್ರಚಾರ ಕಾರ್ಯ ಭರದಿಂದ ಸಾಗಿದೆ. ಇತ್ತೀಚೆಗೆ ಬೆಂಗಳೂರಿನ ಜಿಟಿ ಮಾಲ್​​ನಲ್ಲಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಿರ್ಮಾಪಕರು ಹಾಗೂ ಖ್ಯಾತ ಛಾಯಾಗ್ರಾಹಕ ಜೆ.

ಜಿ. ಕೃಷ್ಣ, ನಟಿ ಸಂಜನಾ ಆನಂದ್ ವಿಶೇಷ ಅತಿಥಿಯಾಗಿ ಆಗಮಿಸಿ ಇಡೀ ತಂಡಕ್ಕೆ ಶುಭಾಶಯ ತಿಳಿಸಿದರು. ಟ್ರೇಲರ್ ಬಿಡುಗಡೆಯ ಬಳಿಕ ಛಾಯಾಗ್ರಾಹಕ ಜೆ. ಜಿ. ಕೃಷ್ಣ ಮಾತನಾಡಿ, "ನಟನೆ ಬಹಳ ಚೆನ್ನಾಗಿದೆ.

‌ಡೈರೆಕ್ಟರ್ ಹಾಗೂ ಕ್ಯಾಮರಾಮೆನ್ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಟ್ರೇಲರ್ ನೋಡಿದಾಗ ಸಿನಿಮಾ ಅದ್ಭುತವಾಗಿ ಇರಲಿದೆ ಎಂಬ ನಂಬಿಕೆ ಬರುತ್ತದೆ. ಚಿತ್ರದ ಪ್ರತೀ ಫ್ರೇಮ್ ಸುಂದರವಾಗಿದೆ. ನಿರ್ಮಾಪಕರು ಉಳಿದರೆ ನೂರು ಕುಟುಂಬಕ್ಕೆ ಊಟ ಹಾಕುತ್ತಾರೆ. ನಿರ್ಮಾಪಕರು ಗೆಲ್ಲಬೇಕು" ಎಂದರು.

"ಇಡೀ ಲವ್ ಯು ಮುದ್ದು ಚಿತ್ರತಂಡಕ್ಕೆ ಒಳ್ಳೆಯದಾಗಲಿ. ಚಿತ್ರರಂಗಕ್ಕೆ ನನ್ನನ್ನು ಪರಿಚಯಿಸಿದ್ದು ಕುಮಾರ್. ಅವರ ಬರವಣಿಗೆ ನನಗೆ ತುಂಬಾ ಇಷ್ಟವಾಗುತ್ತದೆ. ಲವ್ ಯು ಮುದ್ದು ಟ್ರೇಲರ್ ಪ್ರಾಮಿಸಿಂಗ್ ಆಗಿದೆ. ಕೆಮಿಸ್ಟ್ರಿ ಆಫ್ ಕರಿಯಪ್ಪ ಎಷ್ಟು ಸಕ್ಸಸ್ ಕೊಟ್ಟಿತ್ತೋ ಅದರ ನೂರರಷ್ಟು ಸಕ್ಸಸ್ ಈ ಚಿತ್ರ ಕೊಡಲಿ.

ಸಿದ್ದು ಅವರ ಡೆಡಿಕೇಷನ್ ನೋಡಿ ಬಹಳ ಖುಷಿಯಾಯ್ತು. ಇಡೀ ತಂಡಕ್ಕೆ ಒಳ್ಳೆಯದಾಗಲಿ" ಎಂಬುದು ನಟಿ ಸಂಜನಾ ಆನಂದ್ ಅವರ ಮಾತು. "ಇದು ನನ್ನ ಐದನೇ ಸಿನಿಮಾ. ಮಹಾರಾಷ್ಟ್ರದಲ್ಲಿ ನಡೆದ ಘಟನೆ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಮನಸ್ಸಿಗೆ ಮುಟ್ಟುವ ಕಥೆ.

ನಿರ್ಮಾಪಕರು ನನ್ನ ಮೊದಲ ಸಿನಿಮಾದಿಂದ ಬಹಳ ಸಪೋರ್ಟ್ ಮಾಡಿಕೊಂಡು ಬಂದಿದ್ದಾರೆ. ಇದೀಗ ಲವ್ ಯು ಮುದ್ದು ಚಿತ್ರಕ್ಕೆ ಹಣ ಹಾಕಿದ್ದಾರೆ. ಒಳ್ಳೆ ತಾರಾಬಳಗ ಚಿತ್ರದಲ್ಲಿದೆ" ಅಂತಾರೆ ನಿರ್ದೇಶಕ ಕುಮಾರ್. ಯುವನಟ ಸಿದ್ದು ಮೂಲಿಮನಿ ಮಾತನಾಡುತ್ತಾ, "ನಮ್ಮ ನಿರ್ದೇಶಕರು ಪ್ರೀತಿಯೇ ಸಕಲ, ಸರ್ವಸ್ವ ಎಂದು ನಂಬಿದ್ದ ಜೋಡಿಯ ಬಾಳಲ್ಲಿ ನಡೆದ ತಿರುವನ್ನು ಕಾಡುವಂತೆ ಸೊಗಸಾಗಿ ಹೆಣೆದಿದ್ದಾರೆ. ಎಲ್ಲ ಪಾತ್ರಗಳು ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚೊತ್ತಲಿವೆ.

ಪ್ರೇಕ್ಷಕರಿಗೆ ನಮ್ಮ ಚಿತ್ರ ಇಷ್ಟವಾಗಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಜೇಶ್‌ ನಟರಂಗ, ತಬಲಾ ನಾಣಿ, ಗಿರೀಶ್‌ ಶಿವಣ್ಣ, ಶ್ರೀವತ್ಸ ಮತ್ತು ಸ್ವಾತಿ ತಾರಾಬಳಗದಲ್ಲಿದ್ದಾರೆ. ಕಿಶನ್ ಎಂಟರ್‌ಟೈನ್ಮೆಂಟ್ ಬ್ಯಾನರ್‌ನಡಿ ಕಿಶನ್ ಟಿ. ಎನ್. ಚಿತ್ರ ನಿರ್ಮಾಣ ಮಾಡಿದ್ದಾರೆ.

ಕಾರ್ಯಕಾರಿ ನಿರ್ಮಾಪಕರಾಗಿ ಲಕ್ಷ್ಮಿಕಾಂತ್ ಟಿ. ಎಸ್. ತಂಡದ ಭಾಗವಾಗಿದ್ದಾರೆ. ಕೃಷ್ಣ ದೀಪಕ್ ಛಾಯಾಗ್ರಹಣ, ಅನಿರುದ್ಧ್ ಶಾಸ್ತ್ರೀ ಸಂಗೀತ ನಿರ್ದೇಶನ ಹಾಗೂ ಸಿ. ಎಸ್.

ದೀಪು ಸಂಕಲನ ನಿರ್ವಹಿಸಿದ್ದಾರೆ. ನವೆಂಬರ್ 7ಕ್ಕೆ ರಾಜ್ಯಾದ್ಯಂತ ಸಿನಿಮಾ ರಿಲೀಸ್ ಆಗುತ್ತಿದೆ. ಜಗದೀಶ್‌ ಫಿಲ್ಮ್ಸ್ ಚಿತ್ರವನ್ನು ರಾಜ್ಯಾದ್ಯಂತ ವಿತರಣೆ ಮಾಡುತ್ತಿದೆ.

📚 Related News